ಆನ್ಲೈನ್ ಬ್ಯಾಂಕಿಂಗ್ ಕಾಲಮಾನದ ಅಗತ್ಯ. ಅದನ್ನು
ನಿರಾಕರಿಸಲು ಸಾಧ್ಯವೇ ಇಲ್ಲ. ಆದರೆ, ಬಳಸುವ ಪ್ರತಿ ಹಂತದಲ್ಲೂಎಚ್ಚರ ವಹಿಸಬೇಕು.
ಮೈಮರೆವು ಸಲ್ಲದು, ಮಾಹಿತಿ ಹಂಚಿಕೊಳ್ಳುವಾಗ ಹುಷಾರಾಗಿರಬೇಕು, ಮಾಹಿತಿ ಇಲ್ಲದೆ
ವ್ಯವಹಾರ ನಡೆಸಬಾರದು ಎನ್ನುವುದು ಸೈಬರ್ ತಜ್ಞರ ಅಭಿಮತ.
ಹಲವು ಮಾದರಿಯಲ್ಲಿ ಸೈಬರ್ ಅಪರಾಧಗಳು ಜರುಗುತ್ತಿವೆ. ಆದರೆ, ಬ್ಯಾಂಕ್, ಕಾರ್ಡ್
ಸೇರಿ ಇನ್ನಿತರ ಯಾವುದೇ ಗೌಪ್ಯ ಮಾಹಿತಿಯನ್ನು ಮೌಖಿಕವಾಗಿ, ಮೆಸೇಜ್, ಆನ್ಲೈನ್ ಮೂಲಕ
ಶೇರ್ ಮಾಡಿಕೊಳ್ಳದೇ ಇದ್ದರೇ ನಮ್ಮ ಹಣ ಕಳೆದುಕೊಳ್ಳುವ ಸಾಧ್ಯತೆ ಇರುವುದಿಲ್ಲ ಎಂದು
ಹೇಳುವ ಮೂಲಕ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ
ಬಿ. ದಯಾನಂದ ಅವರು ಜನರ ಜಾಗೃತ ವ್ಯವಹಾರವೇ ಇದಕ್ಕೆಲ್ಲ ಮದ್ದು ಎಂಬ ಸಂದೇಶ
ರವಾನಿಸಿದರು.
ವಂಚನೆಗೆ ಒಳಗಾಗದಿರಲು ಮುನ್ನೆಚ್ಚರಿಕೆ
ಬ್ಯಾಂಕ್ ಖಾತೆ ವಿವರ, ಎಟಿಎಂ ಪಿನ್ ಯಾರ ಜತೆಗೂ ಹಂಚಿಕೊಳ್ಳಬೇಡಿ
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವಾಗ ಬಹಳ ಎಚ್ಚರದಿಂದಿರಿ
ಆಧಾರ್ ಮತ್ತು ಪ್ಯಾನ್ ವಿವರಗಳನ್ನು ನೀಡುವಾಗ ಜಾಗೃತೆ ಇರಲಿ
ಅಗಾಗ ಎಟಿಎಂ, ಆನ್ಲೈನ್ ಬ್ಯಾಂಕಿಂಗ್ ಪಾಸ್ವರ್ಡ್ ಬದಲಿಸಿ
0 comments: